ನನಗಿಷ್ಟವಾದ ಒಂದು ಪೇಜ್

ಇತಿಹಾಸಕ್ಕೆ ಜಾತಿ ಲೇಪ ಹಚ್ಚಿದ ನೈಜ ದೇಶದ್ರೊಹಿಗಳು!

ಕೋಪಿಷ್ಟರಾಗಬೇಡಿ! ಇದು ನಿಜ, ಇದರ ಮರ್ಮ ತಿಳಿಯ ಬೇಕೆಂದರೆ ಮೊದಲು ಪ್ರಜಾಪ್ರಭುತ್ವಕ್ಕೂ ರಾಜಾಡಳಿತಕ್ಕೂ ಇರುವ ವ್ಯತ್ಯಾಸ ಅರಿಯಬೇಕು. ಇಂದು ಇದರ ಬಗ್ಗೆ ಏನೂ ತಿಳಿಯದ ಮೂರ್ಖರು ತಿರುಚಿದ ಇತಿಹಾಸ ಹೇಳುವುದರಲ್ಲಿ ಮೊದಲಿಗರು! ಅವರು ಕೆಲ ಮತಾಂದರ, ಹೊಲಸು ರಾಜಕಾರಣಿಗಳ ಗೂಡ ಮನಸ್ಸು ತಿಳಿಯದೆ ಅವರು ಪ್ರಚಾರ ಪಡಿಸುವ ತಿರುಚಲ್ಪಟ್ಟ ಇತಿಹಾಸ ನುಂಗಿ ಅದನ್ನೆ ಜೀವವಾಗಿಸಿಬಿಟ್ಟಿದ್ದಾರೆ. ಈ ತಿರುಚಲ್ಪಟ್ಟ ಇತಿಹಾಸದಿಂದಾಗಿ ಭವ್ಯ ಬಾರತದ ಭವಿಷ್ಯ ಇದರ ಪ್ರಥಿಫಲನವಾಗುವತ್ತ ಸಾಗಿದೆ!
ಇದರ ಪರಿಣಾಮಗಳು ಹಲವು, ಪ್ರಮುಖವಾಗಿ ಕೋಮುದ್ವೆಷ ಅದರ ಉತ್ತುಂಗಕ್ಕೆ ತಲುಪುತ್ತಿದೆ, ಧರ್ಮ ಸಹಿಷ್ನುತೆ ಅವನತಿಯತ್ತ ಸಾಗಿದೆ, ನ್ಯಾಯವಾಗಿ ಗೌರವ ದಕ್ಕಬೇಕಾಗಿದ್ದ ಇತಿಹಾಸ ಪುರುಷರಿಗೆ ಅವಮಾನದ ಕಾಲವಾಗಿಬಿಟ್ಟಿದೆ!ಇದೆಲ್ಲದರ ಫಲವಾಗಿ ಕ್ರೌರ್ಯದ ಭಾರತ ನಿರ್ಮಾಣವಾಗುತ್ತಿದೆ! ನೈಜ ಇತಿಹಾಸ ಎಲ್ಲರಿಗೂ ತಲುಪುವಂತೆ ಮಡುವುದೊಂದೇ ಇದಕ್ಕಿರುವ ಪರಿಹಾರ!
ರಾಜಾಡಳಿತದಲ್ಲಿ ರಾಜರ ಮೊದಲ ಆದ್ಯತೆ  ಆಧಿಪತ್ಯ ವಿಸ್ತರಣೆ, ಈ ಸಮಯದಲ್ಲಿ ಅವರೆದುರು ಯಾರು ನಿಂತರೂ ಅವರನ್ನ ಸುಮ್ಮನೆ ಬಿಡುವ ಪ್ರಸಂಗ ಯಾವ ರಾಜರಿಂದಲೂ ಬರದು! ಅದೇ ಅವರ ಪ್ರೌಡಿ, ಅದೇ ಅವರ ಆಧಿಪತ್ಯದ ಚಿನ್ಹೆ! ಈಗಿರುವಾಗ ಒಂದು ರಾಜನ  ಆಧಿಪತ್ಯ ವಿಸ್ತರಣೆಗೆ ಧರ್ಮದ ಲೇಪ ಹಾಕಿ ಈ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಕೊಮುದ್ವೆಷ ಹರಡುವುದು ಎಷ್ಟರ ಮಟ್ಟಿಗೆ ಸರಿಯಾಗಬಹುದು? ಅಲ್ಲದೆ ಒಬ್ಬ ರಾಜ ಇನ್ನೊಬ್ಬನನ್ನು ಸೊಲಿಸಿ ತನ್ನ  ಆಧಿಪತ್ಯ ವಿಸ್ತರಿಸಿದಾಗ ಆ ಪ್ರದೆಶದ ಸರ್ವ ಸಂಪತ್ತು ಅವನ ಹಿಡಿತಕ್ಕೆ ಬರುತ್ತದೆ, ಇದು ರಾಜ ನೀತಿ! ಈಗಿರುವಾಗ ಅದಕ್ಕೂ ಧರ್ಮದ ಲೇಪ ಹಾಕಿ, ಆ ಧರ್ಮದವರು ದೂಚಿದರು ಎಂಬ ತಿರುಚುವಿಕೆ ಎಷ್ಟು ಹೇಯ ಷಂಡತನ ಅಲ್ಲವೇ?
ಆ ಕಾಲದಲ್ಲಿ ಬಲಿಷ್ಟರು ತಮ್ಮ ಅಧಿಕಾರ ವಿಸ್ತರಣೆಯತ್ತ ಸಾಗಿದ್ದರೆ, ಚಿಕ್ಕ ಪುಟ್ಟ ರಾಜರು ಅವರ ಆಧಿಪತ್ಯ ಉಳಿಸುವತ್ತ ಕಣ್ಣು ನೆಟ್ಟಿದ್ದರು! ಎಲ್ಲದರ ಮದ್ಯೆ ಶಕುನಿಯಾಗಿ ಬಂದವನೇ ಪರಂಗಿಯೆಂಬ ಭೂತ! ಇವರು ಈ ದೆಶಕ್ಕೆ, ಅಲ್ಲ ಈ ವಿಶ್ವಕ್ಕೇ ಕೊಳ್ಳಿ ಇಟ್ಟ ಸ್ವಾರ್ಥಿಗಳು! ಈಗಲೂ ಮಾಡುವಂತೆ ಬಲಿಷ್ಟ ಶತ್ರುವಿನ ಪಕ್ಕದಲ್ಲಿರುವ, ಶತ್ರುವಿನ ಶತ್ರುವಿಗೆ ಮಿತ್ರನಂತೆ ನಟಿಸಿ ತೋರಿಸಿ, ಅವನೊಂದಿಗೆ ಸೇರಿ ಬಲಿಷ್ಟನನ್ನು ಸೊಲಿಸಿ ಇಬ್ಬರನ್ನು ತನ್ನ ತೆಕ್ಕೆಗೆ ಹಾಕುವ ನೀತಿಯೊಂದಿಗೆ ಭಾರತಕ್ಕೆ ಬಂದು ಆಳಿ, ತಿಂದುಂಡು, ಬುತ್ತಿ ಕಟ್ಟಿ, ವಿಷ ಬಿತ್ತಿ ಹೋದರು! ಈ ವಿಷವನ್ನೆ ಈಗ ನಮ್ಮಲ್ಲಿರುವ ಷಂಡರು ಸ್ವಾರ್ಥಕ್ಕಾಗಿ ಬಳಸುತಿದ್ದಾರೆ ಎಂದರೆ ತಪ್ಪೇ ಆಗಲಾರದು!
ಇಲ್ಲೊಂದು ವಿಸ್ಮಯವಿದೆ! ತನ್ನ ಅಧಿಪತ್ಯ ರಕ್ಷಣೆಗಾಗಿ ಹಿಂದೂ ರಾಜನೊಬ್ಬ ಪರಂಗಿಗಳ ಸಹಾಯ ಪಡೆದಿದ್ದರೆ ಅದು ಅವನ ಅವಶ್ಯಕತೆಯೆಂದೂ, ಅದನ್ನೇ ಮುಸ್ಲಿಮ್ ರಾಜನೊಬ್ಬ ಮಾಡಿದ್ದರೆ (ಇದು ಕಾಣುವುದು ಕಷ್ಟ) ಅದು ದೇಶ ದ್ರೋಹ ಎಂದು ಲೇಪ ಹಾಕುವ ಮತಾಂದ ದೇಶ ಭಕ್ತರೆಂಬ ದೇಶ ದ್ರೊಹಿಗಳಿಗೆ ಎನೆನ್ನಬೇಕು? ಹಿಂದೂ ರಾಜರ (ಇಲ್ಲಿ ಬೆರೆ ಮತೀಯ ರಾಜರು ಇದ್ದದ್ದೇ ಕಡಿಮೆ) ಮೇಲೆ ಆಕ್ರಮಣ ಮಾಡಿದನೆಂಬ ಕಾರಣಕ್ಕೆ ದೇಶದ್ರೊಹಿ ಪಟ್ಟ ಕಟ್ಟುವ ಮತಾಂದರಿಗೆ ಬುದ್ದಿ ಇರುವುದೆ ಕಾಲ್ಪನಿಕವೆನ್ನಬಹುದು! ಭಾರತದಲ್ಲಿ ಪರಂಗಿಗಳಿಂದ ಸಹಾಯ ಪಡೆದು ಅವರಿಗೆ ಬಾರತದ ಮಣ್ಣಿಗೆ ನುಸುಳಲು ಸಹಾಯ ಮಾಡಿದ ಚಿಕ್ಕ ಪುಟ್ಟ ರಾಜರೆ ನೈಜವಾಗಿ  ದೇಶ  ದ್ರೊಹಿಗಳಾಗಿ ಬಿಂಬಿಸಲ್ಪಡಬೆಕಾದುದು ಎನ್ನುವ ಸತ್ಯ ಇವರಿಗೆ ತಿಳಿಯಲಿಲ್ಲವೆನೊ! ಇಲ್ಲೂ ಸಹಾಯವನ್ನು ಸಮರ್ತಿಸುವ ರೀತಿ ಬಲು ರುಚಿಕರ! ಬಲಿಷ್ಟ ರಾಜ ಮತಾಂದನಾಗಿದ್ದ ಆದರಿಂದ ಅವನ ದರ್ಮದ ಮೆಲಿನಾ ಕ್ರೌರ್ಯದಿಂದ ಪಾರಾಗಲು ಪರಂಗಿಗಳ ಸಹಾಯ ಪಡೆದರು ಎನ್ನುವರು! ಇದನ್ನ " ಧರ್ಮ ರಕ್ಷಣೆಗಾಗಿ ದೇಶ ಸುಟ್ಟರು" ಎನ್ನಬಹುದೆ? ಸತ್ಯದಲ್ಲಿ ಎಲ್ಲ ರಾಜರಂತೆ ಅವನು ಅವನ ಅಧಿಕಾರ ರಕ್ಷಣೆಯ ಮೋಹದಿಂದ ಪರಂಗಿಗಳ ಬಲೆಗೆ ಬಿದ್ದ ಅಷ್ಟೆ, ಹಾಗೇ ಬಲಿಷ್ಟ ಅವನ ಅಧಿಕಾರ ವಿಸ್ತರಣೆಗಾಗಿ ದಾಳಿ ಮಾಡುತಿದ್ದ ಅಷ್ಟೆ!

ಕರ್ಣಾಟಕದ ಮಟ್ಟಿಗೆ ಹೇಳುವುದಾದರೆ ಮೇಲಿನ ಪ್ರಸಂಗಕ್ಕೆ ಉದಾಹರಣೆ ತನ್ನ ರಾಜ್ಯವನ್ನ ಅತಿಯಾಗಿ ಪ್ರೀತಿಸಿದ, ಪರಂಗಿಗಳ ಸಿಂಹ ಸ್ವಪ್ನವಾಗಿದ್ದ ಟಿಪ್ಪು ಸುಲ್ತಾನ್. ಅರಮನೆಯ ಮುಂದೆಯೇ ದೇಗುಲಗಳಿಗೆ ಅವಕಾಶ ಕೊಟ್ಟಿದ್ದರೂ, ಆಸ್ತಾನದಲ್ಲಿ ಹಿಂದುಗಳಿದ್ದರೂ ಇವನಿಗೆ ಮತಾಂದ ಪಟ್ಟ! ಕಾರಣ ರಾಜ್ಯ ವಿಸ್ತರಣೆ ವೇಳೆ ಎದುರು ನಿಂತವರನ್ನು ನಿರ್ನಾಮ ಮಾಡಿದ, ಅದರಲ್ಲಿ ಅನೇಕರು ಹಿಂದುಗಳು ( ಕಾರಣ: ಎದುರು ಇತರ ದರ್ಮೀಯ ರಾಜರು ಇರಲಿಲ್ಲ ಎನ್ನಬಹುದು)! ಇದನ್ನೆ ಒಬ್ಬ ಮತಾಂದ " ಟಿಪ್ಪು ದರ್ಮಾಂದನಾಗಿ ಹಿಂದೂಗಳನ್ನು ಕೊಲ್ಲುತಿದ್ದ, ಆಗ ನಮ್ಮ ರಾಜರು ದರ್ಮ ರಕ್ಷಣೆಗಾಗಿ ಪರಂಗಿಗಳ ಸಹಾಯ ಪಡೆದು ಟಿಪ್ಪುವಿನ ವಿರುದ್ದ ಹೊರಾಡಿದರು" ಎಂಬಂತೆ ಬರಿಯುತಾನೆ! ಅದನ್ನೇ ಕೆಲವು ಪತ್ರಿಕೆಗಳು ಪ್ರಸಾರ ಪಡಿಸುತ್ತವೆ! ಇಲ್ಲಿ ಯಾರು ದೇಶ ದ್ರೋಹಿ? ಅಧಿಪತ್ಯ ರಕ್ಷಣೆಗಾಗಿ ಪರಂಗಿಗಳ ಕೈ ಹಿಡಿದು ಮೋಸ ಹೊದವನೊ ಅಥವಾ ಉಸಿರಿರುವ ತನಕ ರಾಜ್ಯಕ್ಕಾಗಿ ಹೋರಾಡಿದವನೋ? ಇಲ್ಲಿ ನಿಜವಾಗಿಯು ಒಬ್ಬನನ್ನು ದೇಶ ದ್ರೋಹಿ ಎಂದೋ, ಇನ್ನೊಬನನ್ನು ದೇಶ ಪ್ರೆಮಿಯೆಂದೋ, ದರ್ಮ ರಕ್ಶಕನೆಂದೋ ಹೇಳಬೇಕಾಗಿಲ್ಲ, ಬದಲು ಅದು ಅವರ ರಾಜ ನೀತಿಯಾಗಿತ್ತು ಎಂದು ಸುಮ್ಮನಿರುವುದು ಬಿಟ್ಟು, ಇದನ್ನ ದರ್ಮಾಂದರು ಜಾತಿ ಲೇಪ ಹಚ್ಚಿ ಇಂದಿನ ಪ್ರಜಾ ಪ್ರಭುತ್ವ ವ್ಯವಸ್ತೆಯಲ್ಲಿ ಕೋಮು ಭಾವನೆ ಕೆರಳಿಸಿ ಬಹುಸಂಕ್ಯಾತರ ವೊಟು ಗಳಿಸಿ ಪರಂಗಿಯಂತೆ ಅಳಲು ಹೊರಟಿದ್ದಾನೆ!
ಎಚ್ಚೆತ್ತು ಕೊಳ್ಳಬೇಕಾದ ಕರ್ತವ್ಯ ಪೂರ್ಣವಾಗಿಯು ಬಹು ಸಂಕ್ಯಾತರಾದ ಹಿಂದುಗಳ ಮೇಲಿದೆ, ನೀವು ಈ ಮತಾಂದರ ಪರಂಗಿ ನಾಟಕಕ್ಕೆ ತಲೆದೂಗಿ ದೇಶವನ್ನ ಇನ್ನೊಮ್ಮೆ ದರಿದ್ರವಾಗಿಸಬೇಡಿ! ಪ್ರಜಾಬ್ರಭುತ್ವ ವ್ಯವಸ್ತೆಯಲ್ಲಿ ಜಾತಿ ಮತ ಬೇದವಿಲ್ಲದೆ, ಒಗ್ಗಟ್ಟಾಗಿ ಇಂದಿನ ನಮ್ಮ ಸಮಸ್ಯೆಗಳ ನಿರ್ಣಾಮದತ್ತ ಮುನ್ನುಗ್ಗೋಣ. ಭೂತಕಾಲವನ್ನು ಕೆದಕಿ ಲೇಪಿಸಿ ವರ್ತಮಾನ, ಭವಿಷ್ಯವನ್ನು ಹಾಳುಮಾಡುವ ಮೂರ್ಖರು ನಾವಾಗಬಾರದಲ್ಲವೆ?

No comments:

Post a Comment