ನನಗಿಷ್ಟವಾದ ಒಂದು ಪೇಜ್

ಯಾರ ತಪ್ಪ ಹೇಳಲಿ ನಾ ಇಂದು?

ಒಂದು ಕಡೆ ಮತಾಂತರ ಇನ್ನೊಂದು ಕಡೆ ಭಯೋತ್ಪಾದನೆ, ಇದೆರಡನ್ನೂ ಕಂಡು ಪ್ರತಿ ತಂತ್ರದತ್ತ ಹೆಜ್ಜೆ ಇಟ್ಟವರು ಮಗದೊಂದು ಕಡೆ. ಏನಿದು? ಅನಾಚಾರದ ಅಡ್ಡೆಯೆ? ಅಥವ ಭೂಲೊಕದ ನರಕವೆ? ಹೀಗೆ ಪ್ರಶ್ನೆಗಳು, ಚಿಂತೆಗಳು ಉದುರುತ್ತಾ ಹೋಗುತ್ತವೆ. ಇದೆಲ್ಲಾ ಅರೊಪಗಳೇ? ಇಲ್ಲ ಕಂಡಿತಾ ಇದೆಲ್ಲ ನಮ್ಮ ಭಾರತದೊಳಗಡೆ ನಡೆಯುತ್ತಿರುವ ನಿಜ ಸಂಭವಗಳು.
ಇಲ್ಲಿ ನಾನು ನನ್ನ ವೀಕ್ಷಣೆಯಲ್ಲಿ ಭಾರತದ ಪ್ರಮುಖ ಮೂರು ಧರ್ಮಾನುಯಾಯಿಗಳನ್ನ ಪ್ರತಿವಾದಿಯಾಗಿ ವಿಶ್ಲೇಷಿಸುವೆ, ಸರಿಯೋ ತಪ್ಪೋ ತೀರ್ಮಾನ ನಿಮ್ಮದಿರಲಿ. ಹಾಗೆಯೇ ಹೊಗೆಯಾಡುತ್ತಿರುವ ಭಾರತ ನೆಲವ ತಂಪಾಗಿಸುವ ಪ್ರಯತ್ನ ಮುಂದೆ ಸಾಗಲಿ....

ಯಾತಕ್ಕದರೂ ಇವರು ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ? ಇದಕ್ಕೆ ಸಮರ್ಪಕ ಉತ್ತರ ಯಾರಿಂದಲೂ ಸಾದ್ಯವಿಲ್ಲ. ಇದೊಂದು ನೀಚ ಹಾಗೂ ರಾಕ್ಷಸೀಯ ಪ್ರವೃತ್ತಿ. ತಮ್ಮ ರಕ್ಷಣೆಗಾಗಿ ಅಥವಾ ಶತ್ರುಗಳ ಸಂಹಾರಕ್ಕಾಗಿ ಅಮಾಯಕರ ಬಲಿ ಸಮರ್ಥನೀಯವಾಗಲಾರದು. ಇತರರಿಂದ ತೊಂದರೆ ಇದ್ದರೆ ಅವರ ಮೇಲೆರಗುವ ಬದಲು ಸಹನೆಯಿಂದ ಶಾಂತಿಯ ಪ್ರತೀಕಗಳಾಗಿ ನಿಲ್ಲಬೇಕಾದ ಕರ್ತವ್ಯ ಕಲ್ಲೆಸತದಿಂದಾಗಿ ಮೈಯಿಂದ ರಕ್ತದ ಕೋಡಿ ಹರಿದರೂ ಸಹನೆ ತಾಳಿದ ಪ್ರವಾದಿಯರ ಅನುಯಾಯಿಗಳದ್ದು. ಇನ್ನು ಪಾಕಿಸ್ತಾನದಿಂದ ಭಾರತದೆಡೆಗೆ ಬರುವ ದಾಳಿಯನ್ನು ಸಮರ್ಥಿಸುವವರು ದೇಶಬ್ರಷ್ಟರಾಗುವ ಮೊದಲೇ ಧರ್ಮಬ್ರಷ್ಟರು. ಇನ್ನು ಮುಸ್ಲಿಮ್ ಕಾನೂನುಗಳ ಹೆಸರಲ್ಲಿ ನಡೆಯುವ ಸ್ವಾರ್ಥ ಕಾರ್ಯಗಳನ್ನು ಎಂದೂ ಸಹಿಸಲಾಗದು. ಇದನ್ನೆಲ್ಲ ಬೇರುಸಮೇತ ಕಿತ್ತೊಗೆಯುವ ಕಾರ್ಯ ಬುದ್ದಿವಂತ ಮುಸಲ್ಮಾನರಿಂದ ಸಾದ್ಯವಾಗಬೇಕು. ಶಾಂತಿ ಸಹಬಾಳ್ವೆ ಬಿತ್ತುವ ಧರ್ಮ ಎಂದು ಹೇಳಿ ಸಾಗುವ ಬದಲು ನಿರೂಪಿಸಿ ತೊರಿಸಬೇಕಾದ ಕರ್ತವ್ಯ ಪ್ರಜ್ಞಾವಂತ ಮುಸಲ್ಮಾನರದ್ದು. ಬಹುಸಂಕ್ಯಾತರೊಂದಿಗೆ ಅವರ ಭಾವನೆಗಳಿಗೆ ನೋವಾಗದಂತೆ ತಮ್ಮ ಕಾರ್ಯಗಳನ್ನು ನಿಯಂತ್ರಿಸಿ ಅನ್ಯೂನ್ಯತೆ ಸೃಷ್ಟಿಸುವುದು ಉತ್ತಮ, ಇದು ಒಟ್ಟಾರೆ ಭಾರತಕ್ಕೆ ಒಳಿತ ನೀಡುತ್ತದೆ.
ಇವತ್ತು ಹೆಚ್ಚಾಗಿ ಬಡವರ ಮತಾಂತರ ನಡೆಯುತ್ತಿರುವುದು ವಿಪರ್ಯಾಸ. ಇದರಲ್ಲಿ ಪ್ರಮುಖ ಪಾಲು ಕ್ರೈಸ್ತರದ್ದು. ಇಲ್ಲಿ ಗಮನಿಸಬೇಕಾದ ವಿಷಯ, ನೈಜವಾಗಿ ಯಾವೊಬ್ಬನೂ ತಿಳುವಳಿಕೆಯಿಲ್ಲದೆ, ಅದ್ಯಯನ ಮಾಡದೆ ಒಂದು ಧರ್ಮದ ಕಡೆ ಹೋಗಲಾರ. ಆದರೆ ಇವತ್ತು ತಿಳುವಳಿಕೆ ಇಲ್ಲದ ಅದ್ಯಯನ ಮಾಡದ ಬಡ ಕುಟುಂಬಗಳು ದಿನ ಬೆಳಗಾಗುವುದರಲ್ಲಿ ಮತಾಂತರ ಹೊಂದಿರುತ್ತಾರೆ. ಇದಕ್ಕೆ ಕಾರಣ ಅಮಿಷಗಳೆ ಅಥವ ದೀರ್ಗಕಾಲದ ಒಡನಾಟ, ಭೂದನೆಯೆ? ಏನೇ ಆಗಲಿ ಇದು ಸಮಾಜದಲ್ಲಿ ದ್ವೇಷ ಬಿತ್ತುವುದರಲ್ಲಿ ಸಂಶಯವೇ ಇಲ್ಲ. ಇದನ್ನ ನಿಲ್ಲಿಸಬೆಕಾದ ಕರ್ತವ್ಯ ಶಿಲುಬೆಗೇರಿದ ಕ್ರಿಶ್ತನ ಅನುಯಾಯಿಗಳದ್ದು, ಬೋದನೆ ಮಾಡಲೇ ಬೆಕೆಂದಾದರೆ ಅಮಿಷಗಳ ಬಿಟ್ಟು, ರಹಸ್ಯ ಬೋದನೆ ಬಿಟ್ಟು ಸಾರ್ವಜನಿಕವಾಗಿ ಬೋದಿಸಿ. ಇದು ನಿಮಗೂ ಶೋಬೆ ಇತರರಿಗೂ ಸಮಾದಾನ ತರುವ ವಿಚಾರ. ಅನುಭವಸ್ತರಿಂದ ಕೇಳಿ ತಿಳಿದ ಹಾಗೆ ಮದುವೆಯಲ್ಲಿ, ಕೆಲಸ ಕೊಡುವಲ್ಲಿ, ಶಿಕ್ಶಣ ಸಂಸ್ತೆಗಳ ಸೀಟು ಹಂಚಿಕೆಯಲ್ಲಿ.. ಮತಾಂತರದ ಬಲೆ ಬೀಸುವ ಜಾಯಮಾನ ನಿಲ್ಲಿಸುವ ಕೆಲಸ ಪ್ರಜ್ಞಾವಂತರಾದ ಕ್ರೈಶ್ತವರಿಂದ ಆಗಬೇಕಾದದ್ದು ಅನಿವಾರ್ಯ.
ಇದೆರಡನ್ನೂ ಕಂಡು ಬೇಸತ್ತಿರುವ ಬಹುಸಂಕ್ಯಾತರಾದ ಹಿಂದುಗಳು. ಇವರಲ್ಲಿ ಮೂಡಿರುವ ಪ್ರತಿತಂತ್ರದ ರೋಷ. ಇದಕ್ಕೆ ತಕ್ಕಂತೆ ಕ್ರೈಶ್ತ ಹಾಗೂ ಮುಸಲ್ಮಾನರ ಮೇಲೆ ದ್ವೇಷದ ಬೀಜ ಬಿತ್ತುತ್ತಿರುವ ರಾಮ ಭಕ್ತರೆಂಬ ರಾವಣ ಭಕ್ತರು. ಇದರಿಂದಾಗಿ ಸಂಪೂರ್ಣ ಹೊಗೆಯಲ್ಲಿ ಬೇಯುತ್ತಿರುವ ಭಾರತ. ಬಯೋತ್ಪಾದಕರಿಂದ ಹಿಂದುಗಳು ಸತ್ತರೆಂದು ಪಕ್ಕದ ಮನೆಯ ಮುಸ್ಲಿಮನನ್ನು ದ್ವೇಶಿಸುವುದು ಎಂದಿಗೂ ಸರಿಯಾಗಲಾರದು. ಒಂದು ಕಡೆ ಕ್ರೈಶ್ತ ಮತಾಂತರ ನಡೆಯಿತೆಂದು, ಪ್ರಿಯ ಸ್ನೇಹಿತನ ದೂರ ತಳ್ಳಲು ಪ್ರೇರೇಪಿಸುವುದು, ಒತ್ತಾಯಿಸುವುದು ಭಾರತದ ಏಕತೆಗೆ ಮಾರಕವೇ ಸರಿ. ಚರಿತ್ರೆಗಳಲ್ಲಿ ಮುಸ್ಲಿಮ್ ರಾಜರಿಂದ ಮತಾಂತರ ನಡೆದಿದೆ ಎಂದು ಇಂದಿನ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಮುಸಲ್ಮಾನರ ವಿರುದ್ದ ಕತ್ತಿ ಮಸೆಯುವುದು ರಾಮನ ಆದರ್ಶವಾಗಲಾರದು. ಆ ಕಾಲದಲ್ಲಿ ನಡೆದದನ್ನ ಇಟ್ಟು ದ್ವೇಷ ಕಟ್ಟಿ ಈ ಕಾಲದಲ್ಲಿ ಅಶಾಂತಿಗೆ ಸೊಪ್ಪು ಹಾಕುವುದು ನಿಲ್ಲಲೇ ಬೇಕಾಗಿದೆ. ಹಿಂದುಗಳು ಇದೆಲ್ಲದರ ಪರಿಣಾಮದಲ್ಲಿ ಪಾಲುದಾರರಾಗುವುದನ್ನು ತಪ್ಪಿಸುವ ಕಾರ್ಯ ಭಾರತದ ದೊಡ್ಡಣ್ಣನಂತಿರುವ ಪ್ರಜ್ಞಾವಂತ ಹಿಂಧುಗಳಿಂದ ಆಗಲೇ ಬೇಕಾಗಿದೆ.
ಭಾರತದ ಮೂರು ಭುಜಗಳಂತಿರುವ ಈ ಮೂರು ಧರ್ಮದ ಅನುಯಾಯಿಗಳು ಶಾಂತಿಯತ್ತ ಚಿತ್ತ ಅರಿಸದಿದ್ದರೆ ಭಾರತ ಹೊಲಸೆದ್ದಿರುವ ಪಾಕಿಸ್ತಾನಕ್ಕೂ ಕೀಳಾಗುವುದರಲ್ಲಿ ಸಂಶಯವಿಲ್ಲ. ಆಗಬೇಕಾದ ಕಾರ್ಯವೆಂದರೆ ತಮ್ಮತಮ್ಮಲ್ಲಿರುವ ಹುಳುಕುಗಳ ತಾವೇ ಪರಿಹರಿಸಿಕೊಳ್ಳುವುದು ಮತ್ತು ಇತರರ ಹುಳುಕ ನೋಡಿ ಮೈಮರೆಯುವ ಬುದ್ದಿ ಬಿಡುವುದು.
ಒಳಗಿನ ಕಚ್ಚಾಟ ಭಾರತವ ನಲುಗಿಸುವ ಮುನ್ನ ಎಚ್ಚೆತ್ತುಕೊಳ್ಳೋಣ ...

4 comments:

  1. ಚಂದದ ವೀಕ್ಷಣೆ, ಸುಂದರ ಬರಹ, ಸುಂದರ ಕನಸು, ನನಸಾಗುವುದೆಂದೋ.........

    ReplyDelete
  2. ಧನ್ಯವಾದಗಳು ರಾಜಿ. ನಮಸ್ಕಾರ ಮಂಜು. ಅನೇಕ ದಿನಗಳ ಬಳಿಕ ಬಂದು ನೋಡಿದೆ, pbkys ಅವರ ಇರುವಿಕೆ ಕಂಡೆ. ಸಂತೋಷ. ಕನಸುಗಳ ಸರದಾರನಾಗಿ ನಾನಿರುವೆ ಇಲ್ಲಿ

    ReplyDelete
  3. ಜಗತ್ತು ಸ್ವರ್ಗವಾಗಲಾರದು! ಆದರೆ ಕನಸುಗಳು ಮನದಾಳದಲ್ಲಿ ಪುಟಿದೇಳುತ್ತವೆ, ಅದನ್ನೆ ಬರಹದ ಮೂಲಕ ಹೊರ ಹಾಕಿ ಸಮಾದಾನ ಪಟ್ಟುಕೊಳ್ಳುವೆ. ಅಲ್ಲದೆ ಈ ಭೂಲೋಕದಲ್ಲಿ ಇನ್ನೂ ಇದನೆಲ್ಲ ಅರ್ಥಮಾಡಿಕೊಳ್ಳುವ ನಿಮ್ಮಂತಹ ಜನರಿದ್ದಾರೆ ಎಂಬ ಸಂತೋಷ ಕೂಡ.

    ReplyDelete