ನನಗಿಷ್ಟವಾದ ಒಂದು ಪೇಜ್

ಭಾರತದಲ್ಲಿ ಅಡ್ದಾಡುತ್ತಿರುವ ಮಹಾ ಮಾರಿ!

ಮಹಾ ಮಾರಿ ಮತ್ಯಾವುದೂ ಅಲ್ಲ ಅದು ಕೋಮು ದ್ವೇಷ/ಮತೀಯ ದ್ವೇಷವೇ ಆಗಿದೆ! ಮತೀಯ ದ್ವೇಷ ಬಾರತದ ಅಭಿವೃದ್ದಿಗೆ ಇರುವ ಒಂದು ಮಹಾ ತಡೆ. ಇದು ನೂರಕ್ಕೆ ನೂರು ಸತ್ಯ. ಅಲ್ಲ, ಕೊಳೆತ ರಾಜಕೀಯ ಅನ್ನುವಿರಾ? ಆಗಲಿ, ಆದರೆ ಅದಕ್ಕೂ ಕಾರಣ ಈ ಮತೀಯ ದ್ವೇಷವೇ ಅಲ್ಲವೇ? ಒಂದು ಪಕ್ಷ ಬಹುಸಂಖ್ಯಾತರ ರಕ್ಷಕರಾಗಿ ಅವರ ಬಲದಿಂದ ಆಡಳಿತದತ್ತ ನಡೆದರೆ, ಇನ್ನೊಂದು ಪಕ್ಷ ಇನ್ನೊಂದು ಸಮೂಹದ ರಕ್ಷಕರಾಗಿ ಬೊಗಳೆ ಬಿಡುವರು, ಮಗದೊಬ್ಬ ಜಾತ್ಯಾತೀತನಾಗಿ ಇಬ್ಬರ ಜಗಳದ ಲಾಭ ಪಡೆಯಲೊರಡುವನು! ಇಲ್ಲಿ ಪಕ್ಷಗಳ ಮತ್ತು ಅಭ್ಯರ್ಥಿಗಳ ಆಳುವ ಸಾಮರ್ಥ್ಯ ನೋಡದೆ, ರಕ್ಷಕನೆಂದು ಬೊಗಳೆ ಬಿಡುವವನಿಗೆ ಓಟು ಹಾಕಿ ತಾನೇ ಮಹಾ ಸಾದಕ ಅಂದು ಕೊಳ್ಳುವ! ಆದರೆ ಅವನಿಗೆ ತಿಳಿಯಲಿಲ್ಲ ಅವನೆಷ್ಟು ಮುಟ್ಟಾಳ ಎಂಬುದು! ಇನ್ನು ಕೆಲವರು "against corruption" ಹೊರಾಡುವರು, ರಾಜಕೀಯ ಬದಲಾವಣೆಗೆ ಕೂಗುವರು! ಆದರೆ ಅವರಿಗ್ಯಾಕೆ ತಿಳಿಯಲಿಲ್ಲ ಈ ಮತೀಯ ದ್ವೇಷವೇ ಇದರ ಮೂಲ ಎಂಬುದು? ಮೊದಲು ಈ ಪಿಡುಗು ನೀಗಿಸಿದರೆ ರಾಜಕೀಯ ಬದಲಾವಣೆ ಬಹಳ ಸರಳ ಎಂಬುದು ಇವರ ಮಹಾ ಬುದ್ದಿಗೆ ತೊಚಲಿಲ್ಲವೇ?
ಹೆಚ್ಚುತಿರುವ ಮತೀಯ ದ್ವೇಷಗಳಿಗೆ ಪರಿಹಾರ ಬೇಡವೇ? ಅಲ್ಪಸಂಖ್ಯಾತನಾಗಲೀ ಬಹುಸಂಖ್ಯಾತನಾಗಲೀ ಅವನಿಗೆ ತನ್ನಸ್ತಿಕೆ ಅನ್ನುವುದು ಇದ್ದೇ ಇರುತ್ತದೆ. ಹೀಗಿರುವಾಗ ಯಾರೇ ಆಗಲಿ, ಎಷ್ಟು ಬಲಿಷ್ಟನೆ ಆಗಲಿ, ಎಷ್ಟು ಶಕ್ತಿ ಹೀನನೆ ಆಗಲಿ ತನ್ನಸ್ತಿಕೆಗಾಗಿ ಹೊರಾಡುವುದಿಲ್ಲವೇ? ಆದರೆ ಹೋರಾಟದ ದಾರಿಗಳು ಅವರ ಸ್ತಿತಿಗನುಸಾರ ಬದಲಾಗಬಹುದು ಅಷ್ಟೇ! ಇದರ ಫಲವೇ ಅಭದ್ರ ಸಮಾಜ! ಇದರಿಂದ ಬರುವ ನಷ್ಟಗಳು ಒಂದುಕಡೆಗೆ ಮಾತ್ರ ಸೀಮಿತವಾಗಿರಲಾರದು ಎಂಬುದು ಸಹ ತಿಳಿದ ಸಂಗತಿ.ನಮಗೆ ಸ್ವಾತಂತ್ರ್ಯ ಸಿಕ್ಕಿ ೬ ದಶಕಗಳೇ ಕಳೆದಿವೆ, ಇನ್ನೂ ನಾವು ಪರಂಗಿಗಳ ಒಡೆದು ಆಳುವ ಕುತಂತ್ರದ ಬಲಿಪಶುಗಳಾಗಿ, ದೇಶದ ಅಭಿವೃದ್ದಿಗೆ ಮಾರಕವಾಗಿ ಸಾಗಬೇಕೆ? ಒಂದಂತು ಸತ್ಯ, ಈಗ ಇರುವುದು ಒಡೆದು ಗಳಿಸುವ ಕುತಂತ್ರ! ಇದು ಬರೀ ಆಳ್ವಿಕೆಗೆ ಸೀಮಿತವಾಗದೆ ಎಲ್ಲ ಬಗೆಯ ಗಳಿಕೆಗೂ ಉಪಯೋಗಿಸುತಿದ್ದಾರೆ! ರಾಜಕೀಯದಲ್ಲಿ ಮಾತ್ರವಲ್ಲದೆ, ಎಲ್ಲೆಲ್ಲೂ ಇದರ ಉಪಯೋಗ ವಿಸ್ತಾರಗೊಂಡಿದೆ! ಯೋಚಿಸಿ, ಪ್ರಜ್ಞಾವಂತ ಪ್ರಜೆಗಳಾಗಿ ಬವಿಷ್ಯದ ಆಪತ್ತುಗಳ ಅರ್ಥಮಾಡಿಕೊಳ್ಳಿ. ಭಾರತವನ್ನು ಇದರಿಂದ ಮುಕ್ತವಾಗಿಸುವತ್ತ ಹೆಜ್ಜೆ ಇಡೋಣ.
ಕಾರಣಗಳು ಹೇಳುವುದಾದರೆ ಮೊದಲನೆಯದು ಪರಸ್ಪರರ ಬಗೆಗಿನ ತಪ್ಪು ಗ್ರಹಿಕೆ, ಇದಕ್ಕೆ ಪರಂಗಿಗಳ ಕುತಂತ್ರ ಮೈಗೂಡಿಸಿಕೊಂಡ ಶಕುನಿಗಳ ಅಪಪ್ರಚಾರ ಮತ್ತು ಅವರ ಅಪಬೋದನೆಗಳ ಸಹಾಯ, ಹಾಗೆಯೇ ಧರ್ಮದ ಬಗೆಗೆ ಅಲ್ಪಜ್ಞಾನಿಗಳಾದ ಧರ್ಮಾನುಯಾಯಿಗಳು ತಮ್ಮ ಅಲ್ಪ ಜ್ಞಾನದಿಂದಾಗಿ ಎಸಗುವ ತಪ್ಪುಗಳಿಂದ ಪರ ಧರ್ಮೀಯರಿಗೆ ಆ ಧರ್ಮದ ಮೇಲೆ ಉಂಟಾಗುವ ತಪ್ಪು ಗ್ರಹಿಕೆ. ಕೆಲವು ಬುದ್ದಿ ಹೀನರ ಆಮಿಷದ ಮತಾಂತರ ನೀತಿ! ಇನ್ನು ಕೆಲವರ ಚರಿತ್ರೆ ಹಿಡಿದು ವರ್ತಮಾನ ಹಾಳುಮಾಡುವ ಹುಚ್ಚುತನ. ಎಲ್ಲಕಿಂತ ಮಿಗಿಲಾಗಿ ತಿರುಚಲ್ಪಟ್ಟ, ಒಡೆದು ಆಳುವ ನೀತಿಯ ಸ್ಪರ್ಶದಿಂದ ಲೇಪಿತವಾದ ಚರಿತ್ರೆಗಳು! ಇನ್ನು ಕೆಲವರಿಗೆ ಬಹುಸಂಖ್ಯಾತರೆಂಬ ಹುಂಬು! ಅವರಲ್ಲೇ ಕೆಲವರಿಗೆ ಇತರರನ್ನು ಕಾಲಕೆಳಗೆ ತಂದು ಗೂಂಡಾಗಿರಿ ಮಾಡುವ ಆಸೆ!
ಪರಿಹಾರದತ್ತ ನೋಡುವುದಾದರೆ ಎಲ್ಲ ಸಮಸ್ಯೆಗಳನ್ನೂ ತಳದಿಂದ ಪರಿಹರಿಸುತ್ತಾ ಬಂದರೆ ಈ ಸಮಸ್ಯೆ ಮೇಲಿನಿಂದ ಪರಿಹರಿಸುತ್ತಾ ಬರಬೇಕಾಗಿದೆ! ಯಾಕೆಂದರೆ ಇದರ ಬೇರು ಮೇಲ್ಬಾಗದಲ್ಲಿದೆ. ಆದರಿಂದ ಎಲ್ಲ ಧರ್ಮದಲ್ಲೂ ಇರುವ ಮೇಲ್ಪದರದ ನಾಯಕರು ತಮ್ಮಲ್ಲಿರುವ ಅಪನಂಬಿಕೆ ಹೋಗಲಾಡಿಸಿ, ಪರಸ್ಪರ ವಿಶ್ವಾಸ ವೃದ್ದಿಸಿಕೊಳ್ಳುವುದು ಮೊದಲ ಹೆಜ್ಜೆ. ತದನಂತರ ಆ ನಂಬಿಕೆಯನ್ನೂ, ಪರಸ್ಪರರ ಮೇಲಿನ ಗ್ರೆಹಿಕೆಯನ್ನೂ ಆಯಾಯ ನೇತೃತ್ವ ತಳಬಾಗಕ್ಕೆ ಇಳಿಯಬಿಡಬೇಕು. ಇದು ಅಷ್ಟೊಂದು ಕಷ್ಟವಲ್ಲದಿದ್ದರೂ ಒಂದೊಂದು ಸಮುದಾಯದಲ್ಲೂ ಪಕ್ವತೆಯ ನೇತೃತ್ವ ಇರಬೇಕು, ಅಲ್ಲದೆ ಅವರು ಶಾಂತಿ ಪ್ರಿಯರೂ ಮಾನವೀಯತೆಯುಳ್ಳವರೂ ಆಗಿರಬೇಕು! ಇಲ್ಲಿ ಎಚ್ಚರಿಸಲೇ ಬೇಕಾದ ಅವಶ್ಯಕತೆ ಎಂದರೆ ಇವರು ಯಾರೂ ರಾಜಕೀಯದ ನಂಟುಗಾರರಲ್ಲದ ಹಾಗೆ ನೋಡಿಕೊಳ್ಳಬೇಕಾದುದು ಆ ಸಮುದಾಯದ ಹೊಣೆಯಾಗಿದೆ. ಪರಸ್ಪರ ಧರ್ಮಗಳ ಬಗ್ಗೆ ಅರಿವು ಮೂಡಿಸುವುದು ಇದರಲ್ಲಿ ಮುಖ್ಯ ಬಾಗವಾಗಬೇಕು. ಹಾಗೆಯೇ ಸಮುದಾಯಗಳ ಮದ್ಯೆ ಬರುವ ಪ್ರತಿಯೊಂದು ಸಮಸ್ಯೆಗಳೂ ಈ ನೇತಾರರ ಮೂಲಕ ಪರಿಹಾರ ಕಾಣಬೇಕು.

2 comments:

  1. ಮನಮುಟ್ಟುವ ಲೇಖನ...ಲೇಖಕರಿಗೆ ಧನ್ಯವಾದಗಳು,ಇನ್ನು ಮುಂದೆಯೂ ನಾವು ನಿಮ್ಮಿಂದ ಉತ್ತಮ ಲೇಖನಗಳನ್ನು ನಿರೀಕ್ಷಿಸುತ್ತೇವೆ.

    By : JaRaaD

    ReplyDelete