ನನಗಿಷ್ಟವಾದ ಒಂದು ಪೇಜ್

ಕಥೆಯಾದ ಬದುಕೆಂಬ ಕನಸು-೧

ಪಾರಂಪರಿಕ ಸ್ವತ್ತಾದ ವಿದ್ಯೆ...
ಅವನೊಬ್ಬ ವಿದ್ಯಾವಂತ ಶ್ರೀಮಂತ! ಅವನದೊಂದು ಸುಂದರ ಲೋಕ. ಅಲ್ಲಿ ಅವನಿಗೆ ಯಾವುದಕ್ಕೂ ಕೊರತೆಯಿಲ್ಲ. ಅವನದೊಂದು ದೊ(ದ)ಡ್ಡ ಕಥೆ.
ಇವನಿಗೆ ಹತ್ತು ಜನರಿಗೆ ಬೇಕಾದಷ್ಟು ಗಳಿಕೆಯಾಗುತ್ತಿತ್ತು. ಇದೇ ಇವನ ಐಶಾರಾಮಿ ಜೀವನದ ಗುಟ್ಟು! ಈ ಹುಂಬತನದ ಹೆಸರಲ್ಲಿ ಹತ್ತಕ್ಕೆ ಬದಲಾಗಿ ನೂರನ್ನು ವ್ಯಯಿಸುತಿದ್ದ. ಆದರೆ ಅಲ್ಲೇ ಇನ್ನೊಬ್ಬ ಇವನಿಗಿಂತ ಬುದ್ದಿವಂತ, ಶಕ್ತಿವಂತ. ಆದರೆ ಅವನಿಗೆ ಬಡತನ. ಹತ್ತಕ್ಕೆ ಬದಲಾಗಿ ಒಂದನ್ನು ವ್ಯಯಿಸಬೇಕಾದ ಅನಿವಾರ್ಯತೆ. ಇವನ ಬಡತನಕ್ಕೆ ಕಾರಣ ದಕ್ಕದ ನೈಜ ವಿದ್ಯೆ! ಇದರಿಂದ ಕೆಲಸವಿಲ್ಲ/ಇದ್ದರೂ ಆ ಕೆಲಸದಿಂದ ಸಿಗುವುದು ಅಷ್ಟೇ. ಆದರೆ ದುಡಿಮೆ ಮಾತ್ರ ಹತ್ತರಷ್ಟು.
ಶ್ರೀಮಂತನ ನೈಜ ವಿದ್ಯೆಗೆ ಅಪ್ಪನ ಶ್ರೀಮಂತಿಕೆಯೇ ಕಾರಣ, ಹಾಗೆಯೇ ಬಡವ ನೈಜ ವಿದ್ಯೆಯಿಂದ ವಂಚಿತನಾಗಲು ಪಾರಂಪರಿಕ ಬಡತನವೇ ಕಾರಣ. ಹೀಗೆ ದೇಶದ ಸಂಪತ್ತು ಸಂವೃದ್ದವಾದರೂ ಬಡವರ ಪರಂಪರೆ ಕೊನೆಯಿಲ್ಲದೆ ಸಾಗುತ್ತದೆ. ದೇಶದ ಸಂಪತ್ತು ಎಲ್ಲರಿಗೂ ಬೇಕಾದಷ್ಟು ಇದ್ದರೂ ಅರ್ದಕ್ಕಿಂತ ಹೆಚ್ಚು ಜನ ಬಡವರು! ಇದೆಂತಹ ವಿಪರ್ಯಾಸ! ಒಂದೇ ದೇಶದ ಜನ, ಆದರೆ ಕೆಲವರು ಐಶಾರಾಮಿಗಳು ಇನ್ನು ಕೆಲವರು ತುತ್ತು ಅನ್ನಕ್ಕಾಗಿ ಕಷ್ಟ ಪಡುವವರು! ಬಲ್ಲಿದನಿಗೆ ಬಡವನ ಬವಣೆ ನೋಡುವ ಇಚ್ಛೆಯೇ ಇಲ್ಲ. ಸ್ವಾರ್ಥ, ನನಗೆ ಲಬಿಸಿದ್ದು ನನಗೆ ಮಾತ್ರ, ಇದು ನನ್ನ ಸಾಮರ್ತ್ಯದಿಂದ ಲಭಿಸಿದ್ದೆಂಬ ಭ್ರಮೆ. ಮನುಷ್ಯ ಸಂಘಜೀವಿ ಎಂಬುದನ್ನು ಮರೆತ ಹುಂಬ. ತಾನು ಬಯಸುವ ವಿದೇಶಿ ವಸ್ತುಗಳಿಂದ ದೇಶ ಬರಿದಾಗುವುದೆಂಬ ಅರಿವಿಲ್ಲದ ಮುಟ್ಟಾಳ, ಇದಕ್ಕಾಗಿ ತಾನು ಕೊಡುವ ನೂರರಿಂದ ಹತ್ತು ಜನರ ಅವಶ್ಯಕತೆ ನೀಗುವುದೆಂಬ ಪರಿಜ್ಞಾನವಿಲ್ಲದ ಅಂಧ.
ಯಾವ ಶತಮಾನದಲ್ಲಿ ಈ ಅಸಮಾನತೆಯ ಕೊನೆ? ಯಾವಾಗ ಎಲ್ಲರಿಗೂ ಸಮಾನವಾದ ಶಿಕ್ಷಣ ಲಭ್ಯ? ಯಾವಾಗ ಎಲ್ಲರಿಗೂ ಈ ದೇಶದ ಸಂಪತ್ತಿನಲ್ಲಿ ಸಮಾನ ಪಾಲು ಲಭ್ಯ? ಹೀಗೇ ನೂರೊಂದು ಪ್ರಶ್ನೆಗಳ ಕಲರವ, ಉತ್ತರದ ಬೆನ್ನು ನಮ್ಮ ಮುಂದೆ ಕೈಗೆ ಎಟುಕುವಷ್ಟು ಹತ್ತಿರವಿದ್ದರೂ ಹಿಡಿಯಲಾಗದ ಅಸಹಾಯಕತೆ. ಹೊಡೆದುರುಳಿಸುವ ಯೋಚನೆ ಬಂದರೂ ಸತ್ತು ಹೋದರೆ ಏನು ಗತಿ ಎಂಬ ಭಯ!
ಇದು ಬದುಕಿನ ಭಯಾನಕತೆ(ಕಥೆ)!!!
ಇಲ್ಲೊಂದು ಕನಸ ಕಾಣೋಣ ಬನ್ನಿ.....
ಅದೊಂದು ಸುಂದರ ದೇಶ ಅಲ್ಲಿ ಸಂತೋಷ ಸಂವೃದ್ದಿಗಳ ಕಲರವ. ಎಲ್ಲರೂ ಸಂತೃಪ್ತರು, ಎಲ್ಲರಿಗೂ ಬೇಕಾದಷ್ಟು ವಿದ್ಯೆ, ಬೇಕಾದಷ್ಟು ಕೆಲಸ, ಎಲ್ಲ ಕೆಲಸಗಳಿಗೂ ಕೈ ತುಂಬಾ ಸಂಬಳ. ನಿಪುನನಿಗೆ ಆರಾಮದಾಯಕ ಕೆಲಸ, ದಡ್ಡನಿಗೆ ಪರಿಶ್ರಮದ ಕೆಲಸ. ಇದೇ ಇಲ್ಲಿನ ಮಾನದಂಡ. ಜ್ಞಾನಾರ್ಜನೆ ಮಾಡುವವನ ಮೆದುಳಿಗೆ ಶ್ರಮ, ಜ್ಞಾನಾರ್ಜನೆ ಬೇಡವಾದರೆ ದೇಹ ಪರಿಶ್ರಮ. ಏನೇ ಆದರೂ ಎಲ್ಲರಿಗು ಸಮಾನತೆ, ತನ್ನ ಜೀವನ ತಾನೇ ರೂಪಿಸುವ ಸುಂದರ ಅವಕಾಶ. ಬಡವನಿಲ್ಲ ಬಲ್ಲಿದನಿಲ್ಲ, ತನ್ನ ಮನಸ್ಸಿಗೆ ಹತ್ತಿರವಾದವನೇ ಸ್ನೇಹಿತ, ಅವನ ಬಗ್ಗೆ ಬೇರೇನೂ ತಿಳಿಯಬೇಕಿಲ್ಲ.
ಶಿಕ್ಷಣದ ಪೂರ್ಣ ಜವಾಬ್ದಾರಿ ಆಡಳಿತಕ್ಕೆ. ಆಡಳಿತವಂತು ಅನುಗ್ರಹೀತ, ತನ್ನವರಿಗಾಗಿ ಕೆಲಸ ಮಾಡುತ್ತಿರುವೆನೆಂಬ ಹುಮ್ಮಸ್ಸು, ಗಳಿಕೆಗನುಗುಣವಾಗಿ ಎಲ್ಲ ಜನರಿಂದಲೂ ಪಡೆದು ಎಲ್ಲರಿಗೂ ಸಮಾನವಾಗಿ ಅವಶ್ಯಕತೆಗಳ ಪೂರೈಸುವ ನಿಷ್ಠೆ. ಹೀಗೆ ಅವಶ್ಯಕತೆಗಳಲ್ಲಿ ತಾರತಮ್ಯವಿಲ್ಲದ ಸುಂದರ ಸಮಾಜ. ರಾಜಕೀಯ ಎಂಬುದು ಇಲ್ಲಿ ಸಜ್ಜನ, ನಿಷ್ತಾವನ್ತರಾದ ಸೇವಕರ ನೆಲೆ. ಇಲ್ಲಿ ಸೇವೆ ಮಾಡಲು ಸ್ಪರ್ದಿಸುವರೆ ಹೊರತು ಹಣ, ಅಧಿಕಾರಕ್ಕಲ್ಲ.
ಇಲ್ಲಿ ಕಾವಲುಗಾರನ ಮಗ ವಿಜ್ಞಾನಿಯಾಗಬಲ್ಲ, ಹಾಗೆಯೇ ವಿಜ್ಞಾನಿಯ ಮಗ ಕಾವಲುಗಾರನೂ ಆಗಬಲ್ಲ! ಎಲ್ಲವೂ ಅವನವನ ಸಾಮರ್ತ್ಯದ ಮೇಲೆ ಅವಲಂಬಿತ, ಎಲ್ಲೂ ಆತನ ಪರಂಪರೆಯ ಲಾಬ ನಷ್ಟಗಲಿಲ್ಲ. ಮೀಸಲಾತಿಯಂತು ಬೇಡವೇ ಬೇಡ.
ಬನ್ನಿ ಹೊರಡೋಣ ಈ ದೇಶದತ್ತ. ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಹೋಗೋಣ ಬನ್ನಿ. ಬಲ್ಲಿದನು ಬಡವನ ಕೈಯ ಹಿಡಿದು, ಬಡವನು ಬಲ್ಲಿದನ ಕೈಯ ಹಿಡಿದು ಸಾಗೋಣ ಬನ್ನಿ ನನ್ನ ಕರುನಾಡಿನ ಪ್ರಜೆಗಳೇ, ಹಾಗೆಯೇ ನನ್ನ ಭಾರತೀಯ ಪ್ರಜೆಗಳೇ.
ಕೈ ಹಿಡಿಯುವಿರಿ ಅಲ್ಲವೇ......