ನನಗಿಷ್ಟವಾದ ಒಂದು ಪೇಜ್

ಕಥೆಯಾದ ಬದುಕೆಂಬ ಕನಸು-೨

ಮುಂಜಾನೆಯ ಸವಿ ತಂಪಿನಲಿ ಮೂಖನಾದ ನಾನು...
ಹೊರಗಡೆ ತಂಗಾಳಿಯೊಂದಿಗೆ ಮಿಂದು ಸುವಾಸನೆ ಪಸರಿಸುತ್ತಿರುವ ಸುಂದರ ಪರಿಸರ, ಅದರೊಂದಿಗೆ ಕಿವಿ ತಂಪಾಗಿಸುವ ಹಕ್ಕಿಗಳ ಕಲರವ, ಇನ್ನೊಂದು ಕಡೆ ಸೃಷ್ಟಿಕರ್ತನನ್ನು ನೆನೆಯಲು ಜ್ಞಾಪಿಸುತ್ತಿರುವ ಮಂದಿರ, ಮಸೀದಿಗಳ ಕರೆಯೋಲೆ. ಆಗಲೇ ಇದೆಲ್ಲವನ್ನೂ ಸವಿದು ಸೃಷ್ಟಿಕರ್ತನಿಗೆ ನಮಿಸುತ್ತಿರುವ ವಿನಮ್ರಮತಿಗಳು. ಇದೆಲ್ಲದರ ನಡುವೆ ಹಾಯಾಗಿ ಬಿದ್ದುಕೊಂಡಿರುವ ಸೋಮಾರಿಗಳು! ಎಲ್ಲರದ್ದೂ ಒಂದೇ ಇಚ್ಚೆ, ಸಂತೋಷ ತುಂಬಿದ ದಿನ ಬರಲಿ ಎಂಬುದು, ಆದರೆ ಸಿಗುವುದೆಲ್ಲವೂ ದುಃಖ ತುಂಬಿದ ದಿನಗಳೆಂಬ ಅಸಡ್ಡೆ ಇನ್ನೊಂದುಕಡೆ! ಅದಾಗಲೇ ಒಲ್ಲದ ಮನಸ್ಸಿನಿಂದ ಎದ್ದು ಕುಳಿತು ವರ್ತಮಾನ ಮಾತ್ರ ಯೊಚಿಸುವ ಪುಟಾಣಿಗಳು, ಏನೂ ಅರಿಯದ, ಕಪಟತೆಗೆ ಜಾಗವೇ ಇಲ್ಲದ, ಮುದ್ದು ಮನಸ್ಸಿನ ಮುದ್ದು ಸರದಾರರು. ಹೀಗಿದ್ದರೂ ಇವರಲ್ಲಿ ಭಿನ್ನತೆ! ಅಲ್ಲೊಂದು ಮಗುವಿಗೆ ದಿನಕ್ಕೆ ರೂ.500 ಖರ್ಚು, ಆದರೆ ಅಲ್ಲೇ ಇರುವ ಇನ್ನೊಂದು ಮನೆಯ ಮಗುವಿಗೆ ದಿನಕ್ಕೆ ರೂ.5 ಇಲ್ಲದ ದಯನೀಯ ಸ್ತಿತಿ!!! ಇನ್ನು ಕೆಲವು ಇದರ ಮಧ್ಯದವರು. ಒಟ್ಟಿನಲ್ಲಿ ಬೇಕಾದಷ್ಟಿದ್ದರೂ ಸರಿಯಾಗಿ ಹಂಚಿಕೆಯಾಗದ ಜಗತ್ತು. ಒಂದು ಕಡೆ ತನ್ನವರ ಉಪಚಾರದಲ್ಲಿ ಮಿಂದು ಸುಂದರವಾಗಿ ಕಂಗೊಳಿಸುತ್ತಾ, ಸ್ವಚ್ಚವಾಗಿ, ಅರೂಗ್ಯವಂತರಾಗಿ, ಸುಂದರರಾಗಿ ಮಿಂಚುತ್ತಿರುವ, ಸುಖದಲ್ಲಿ ತೇಲುತ್ತಿರುವ ಮುದ್ದು ಮನಸ್ಸಿನ ಯಜಮಾನರು. ಇನ್ನೊಂದು ಕಡೆ ಇದೇ ಹೊತ್ತಿನಲ್ಲಿ ತನ್ನವರ ಪರಿವೆ ಇಲ್ಲದೆ ತುತ್ತು ಅನ್ನಕ್ಕಾಗಿ ಹಪಹಪಿಸುವ, ಪುಟ್ಟ ಪುಟ್ಟ ಕೆಲಸಗಳ ಕನಸ್ಸಿನಲ್ಲಿ ಓಡುವ, ದಾರಿದ್ರ್ಯದ ಬಿಸಿ ಅನುಬವಿಸುವ, ಬದುಕು ಚಿಂದಿಯಾಗಿರುವ ಇನ್ನು ಕೆಲವು ಅದೇ ಮುದ್ದು ಮನಸ್ಸಿನ ಯಜಮಾನರು. ಇದೆಲ್ಲವೂ ಅನುಭವಿಸಬೇಕಾದವರಲ್ಲಿ ಮಕ್ಕಳೂ ಇದ್ದಾರೆ ಎನ್ನುವುದೇ ಹೃದಯದಾಳದ, ಮಾನವೀಯತೆಯ ಕೊರಗಾದ ಸತ್ಯ.
ಹೀಗೆ ಭೂಮಿಗೆ ಕಾಲಿಡುತ್ತಿದ್ದಂತೆ ತಾರತಮ್ಯದ ಬಿಸಿ ಅನುಭವಿಸಲು ಇವರು ಮಾಡಿದ ತಪ್ಪಾದರೂ ಏನು? ಯಾತಕ್ಕಾದರೂ ಈ ರೀತಿಯ ತಾರತಮ್ಯ ತುಂಬಿತುಳುಕುತ್ತಿದೆ? ಆ ದೇವರೇ ಇದನ್ನೆಲ್ಲ ಮಾಡಿಟ್ಟನಾ? ದೊಡ್ಡವರಿಗೆ ಹೀಗಾದರೆ ಸಹಿಸಬಹುದು, ಆದರೆ ಏನೂ ಅರಿಯದ ಪುಟಾಣಿಗಳಿಗೆ ಹೀಗಾಗುವುದನ್ನು ಸಹಿಸಬಹುದೇ? ಇಲ್ಲ, ಸಾದ್ಯವೇ ಇಲ್ಲ ತಾನೆ. ಹಾಗಾದರೆ ಇದೆಲ್ಲವೂ ಸರಿಯಾಗಬಹುದೇ!? ಅದೇನೋ ನಾನರಿಯೆ! ಆದರೂ ಸರಿಯಾಗಬೆಕೆನ್ನುವುದು ನನ್ನ ಕನಸಿನ ಲೋಕದಲ್ಲೊಂದು ಕನಸು...
ಇದೆಲ್ಲವನ್ನು ಕೇಳಿದರೂ, ನೋಡಿದರೂ ಅಸಡ್ಡೆಯಿಂದ ಸ್ವಾರ್ಥಿಗಳಾಗಿ ಬದುಕುವ ಮಾನವ ರೂಪಿ ವಾನರೇ ಯೊಚಿಸಿ, ಒಂದೊಮ್ಮೆ ಈ ಸ್ಥಿತಿ ನಿನ್ನದಾಗಿದ್ದಲ್ಲಿ! ನೀ ತಿನ್ನುವ ಮೃಷ್ಟಾನ್ನದ ಬದಲು ನಿನ್ನ ಮುಂದೆ ತಿಪ್ಪೆ ರಾಶಿಯ ತುಂಡು ರೊಟ್ಟಿ ಬಂದು ಬಿದ್ದರೆ! ನೀ ಹಾಕುವ ಕೊಟಿನ ಬದಲು ಚಿಂದಿ ಬಟ್ಟೆ ಬಂದರೆ! ಯೊಚಿಸುವುದನ್ನೂ ಸಹಿಸಲಾರದು ತಾನೆ...
ಕನಸುಗಳ ಸಾಮ್ರಾಜ್ಯ ಕಟ್ಟಲು ಹೊರಟ ನನಗೆ ಕನಸುಗಳೇ ಬಾರದ ಭಯಾನಕ ಸ್ಥಿತಿ! ಆದರೂ ಕಂಡೆನೊಂದು ಕನಸು. ಎಲ್ಲವೂ ಸರಿಯಾಗುವುದೆಂಬ ಕನಸು! ಆದರೂ ಅದರ ಮಾರ್ಗ ತಿಳಿಯದ ಕೊರಗು. ಮಾನವೀಯತೆ ಮೆರೆಯುವರೆ, ನನ್ನೀ ಭಾರತದ ಬಲ್ಲಿದರೆಂಬ ಭೂಪರು! ಧನಿಕರ ಮನದಲ್ಲಿ ಅರಳಬಹುದೇ, ಬಡವರ ಮೇಲೊಂದು ಕನಿಕರ! ಬುದ್ದಿವಂತ ಸಮಾಜ ಒಟ್ಟಾಗುವುದೇ, ಮುದ್ದು ಮನಸುಗಳ ಕಣ್ಣೀರೊರೆಸಲು! ಎಲ್ಲವೂ ವಿವರಗಳಿಲ್ಲದ ಕನಸಿನ ಪುಟ್ಟ ಪುಟ್ಟ ಪ್ರಶ್ನೆಗಳು... ಎಲ್ಲದಕ್ಕೂ ಹೌದು ಎಂಬ ಸಂಪ್ರೀತಿಯ, ಸಡಗರದ, ಸುವಾಸನೆಯ, ಸಂವೃದ್ದಿಯ, ಎಲ್ಲದಕ್ಕೂ ಹೆಚ್ಚಾಗಿ ಮಾನವೀಯತೆಯ ಕೂಗು ಹೊರ ಹೊಮ್ಮಲಿ ಎಂಬುದೇ ನನ್ನ ಕನಸಿನಾಳದ ಕನಸು...

No comments:

Post a Comment