ನನಗಿಷ್ಟವಾದ ಒಂದು ಪೇಜ್

ಭಾರತವ ಬಡವಾಗಿಸಿದ ಜಾತೀಯತೆ!!!

ತಿಳಿಯುತಿಲ್ಲೆನಗೆ ಜಾತಿ ಧರ್ಮಗಳ ಮರ್ಮ,
ಅರಿಯುತಿಲ್ಲೆನಗೆ ಜಾತಿ ಧರ್ಮಗಳ ಕರ್ಮ,
ಬೇಕಿಲ್ಲೆನಗೆ ಜಾತಿ ಧರ್ಮಗಳ ವರ್ಣ!

ಧರ್ಮದ ಹೆಸರಿನಲ್ಲಿ ಅಧರ್ಮ ರಾರಾಜಿಸುತ್ತಿರುವ ಕಾಲ, ಹೃದಯದಲ್ಲಿರಬೇಕಾದ ಧರ್ಮ ಅಧರ್ಮವಾಗಿ ಮೈಮೇಲೆ ಬಂದು ನಿಂತ ಕಾಲ, ಧರ್ಮಕ್ಕಾಗಿ ಅಧರ್ಮವನ್ನು ಪೋಷಿಸುವ ಕಾಲ, ಪ್ರೀತಿ ಅಹಿಂಸೆಗಳ ಸಾರುವ ಧರ್ಮದ ಹೆಸರಲ್ಲಿ ರಕ್ತ ಕೋಡಿ ಹರಿಸುವ ಕಾಲ, ಧರ್ಮವೇನೆಂದರಿಯದೆ ಧರ್ಮದ ಹೆಸರ ಅಪ್ಪಿ ಅಧರ್ಮವ ಕಟ್ಟಿಕ್ಕೊಂಡ ಕಾಲ. ಬಡವಾಯಿತೇ? ಹೊಲಸಾಯಿತೇ? ಅಧರ್ಮದ ಬೀಡಾಯಿತೇ? ಎಲ್ಲ ಧರ್ಮಗಳ ಅಪ್ಪಿ ಹಿಡಿದ ಈ ನಮ್ಮ ಭಾರತ! ಇಲ್ಲ, ಇಲ್ಲ, ಆಗಬಾರದು. ಎದ್ದೇಳಿ ಬಾರತೀಯರೇ ಒದ್ದೋಡಿಸಿ ಜಾತೀಯತೆಯ.
ಮನದ ಸುವಾಸನೆ ಹೆಚ್ಚಿಸಲು ಸಿಕ್ಕ ಧರ್ಮವೆಂಬ ಸುಗಂಧಕ್ಕೆ  ಬೆಂಕಿ‌ ಇಟ್ಟು ಮನಸುಗಳ ಕರಕಲು ಮಾಡುತ್ತಿರುವವರು ಯಾರು?
ಧರ್ಮವೆಂಬುದು ಮನುಷ್ಯನ ಅಂತರ್ಶುದ್ದಿಗೆ, ಆತ್ಮ ಸಂತೃಪ್ತಿಗೆ, ಒಳಿತಿನ ಸಂವೃದ್ದಿಗೆ ಅವಶ್ಯಕ. ಒಮ್ಮೆ ಇದರಿಂದ ಒಬ್ಬನ ಅಂತರ್ಶುದ್ದಿಯಾಯಿತೆಂದರೆ ಅವನ ಬಾಹ್ಯ ಪ್ರಜ್ವಲಿಸುತ್ತದೆ. ಧರ್ಮವೆಂದೂ ಮನುಷ್ಯನ ಬಾಹ್ಯ ಪ್ರಪಂಚಕ್ಕೆ ಅಂಟಿಕೊಳ್ಳಬಾರದು, ಧರ್ಮ ಮನಸ್ಸಿನಾಳದಲ್ಲಿ ಒಳಿತನ್ನು ಹೊರಸೂಸುವ, ಕೆಡುಕನ್ನು ತಡೆಯುವ ಶಕ್ತಿಯಾಗಿ ಇರಬೇಕು. ಆದರೆ ಇಂದು ಎಲ್ಲವೂ ಅಲ್ಲೋಲ ಕಲ್ಲೋಲ, ಎಲ್ಲರಿಗೂ ಧರ್ಮವಿದೆ ಆದರೆ ಅದು ಬಾಹ್ಯಕ್ಕೆ ಮಾತ್ರ. ಅಂತರಾಳದಲ್ಲಿ ಧರ್ಮವೆಂಬುದೇ ಅವನಿಗರಿಯದು! ಆದರೂ ಕೂಗಾಡುವನು, ಬಡಿದಾಡುವನು ಧರ್ಮಕ್ಕಾಗಿ ಎಂದು, ಆದರೆ ಅವನಿಗರಿಯದು ಅದೆಲ್ಲವೂ ಅಧರ್ಮಕಾಗಿ ಎಂದು. ಆತ ಧರ್ಮವನ್ನು ಪ್ರೀತಿಸುವನು, ಗೌರವಿಸುವನು, ಆದರೂ ಆತ ಅರಿವಿಲ್ಲದೆ ಧರ್ಮಕ್ಕಾಗಿ ಎಂಬಂತೆ ಅಧರ್ಮದ ದಾರಿ ಹಿಡಿಯುವನು. ಎಂತಹ ವಿಪರ್ಯಾಸ ಅಲ್ಲವೇ? ಇನ್ನೊಂದು ಕಡೆ ಜಾತೀಯತೆಯ ಮೆಟ್ಟಿ ನಿಂತವರೆಂದು ಭ್ರಮಿಸಲ್ಪಟ್ಟ ಕೆಲವು ವಿದ್ಯಾವಂತರೆಂಬ ಕಟ್ಟಾ ಜಾತೀಯತೆಯ ಕದೀಮರು. ಇವರಿಗೆ ಪ್ರೀತಿ ಪ್ರೆಮಗಳಿಗೆ ಮಾತ್ರ ಜಾತೀಯತೆ ಇಲ್ಲ!!! ಹೇಳುವ ಧರ್ಮದ ಪರಿದಿಯಲ್ಲಿ ಬರುವ ದೇವರಿಗೆ ಒಂದು ನಮನ ಸಲ್ಲಿಸಲೂ ಇಷ್ಟಪಡದ ಹುಂಬರು, ಆದರೂ ಕಚ್ಚಾಟಕ್ಕೆ ಇವರಿಗೆ ಧರ್ಮ ಇದೆ!!! ಇವರೇತಕ್ಕೆ ಹೀಗೆ ಎಂಬುದ ಆ ದೇವರೇ ಬಲ್ಲ! ಎಲ್ಲರೂ ಒಂದೊಂದು ಧರ್ಮದ ಅನುಯಾಯಿಗಳಾಗಿ ಕಾಣಿಸುವರು, ಒಬ್ಬ @ ಧರ್ಮ ಇನ್ನೊಬ್ಬ # ಧರ್ಮ, ಮತ್ತೊಬ್ಬ * ಧರ್ಮ ಮಗದೊಬ್ಬ & ಧರ್ಮ. ಹೀಗೆ ಹಲವು ಧರ್ಮಗಳ ಹಲವು ಜನ ಆದರೆ ಎಲ್ಲರೂ ಮನುಷ್ಯ ಕುಲದವರು! ದುರಾದೃಷ್ಟ ಎಂದರೆ ಇವರಲ್ಲಿ ಹಲವರು ಮನುಷ್ಯ ಕುಲವನ್ನು ಮರೆತ ಲದ್ಧಿಜೀವಿಗಳು! ಇವರಿಗೆಲ್ಲ ಲದ್ಧಿ ತುಂಬಲು ಗುಂಪು ಕಟ್ಟಿ ಕುಳಿತಿರುವ ನೇತಾರರೆಂಬ ಲದ್ಧಿ ಉತ್ಪಾದಕರು! ಈ ಲದ್ಧಿಯಿಂದ ನಶೆಯೇರಿ ಹುಚ್ಚರಾಗುವ ಪಾಪಿಗಳು. ಎಲ್ಲವೂ ಅರ್ಥಹೀನ...ಇದೆಲ್ಲದರ ಮದ್ಯೆ ಕೆಲವು ರಾಜಕಾರಣಿಗಳೆಂಬ ಲದ್ಧಿ ಪ್ರಚಾರಕರು, ಇವರು ಪ್ರಚಾರಕ್ಕಾಗಿ ಲದ್ಧಿ ತಿನ್ನುವುದಲ್ಲದೆ ಲದ್ಧಿ ತಿಂದವರ ಲದ್ಧಿಯನ್ನೂ ಬಿಡದ ನೀಚರು.
ರಾಜಕೀಯದಿಂದ ಒಂದು ಧರ್ಮದ ಉನ್ನತಿ ಅಥವಾ ಅವನತಿ ಸಾದ್ಯವೇ? ಎಂದಿಗೂ ಇಲ್ಲ! ಇಂದಿನ ರಾಜಕೀಯ ನಂಬಿದವರಿಗೆ ಮಸಿ ಬಳಿಯುವುದೇ ಹೊರತು ಒಳಿತನ್ನೆಂದೂ ಮಾಡಲಾಗದು. ಧರ್ಮವನ್ನು ಪ್ರೀತಿಸುವ ಜನ ಧರ್ಮವನ್ನು ತಮ್ಮ ಚಟುವಟಿಕೆಗಳಲ್ಲಿ ರೂಡಿಸಿಕೊಳ್ಳಬೆಕು ಆಗ ಅದಕ್ಕೊಂದು ಅರ್ಥ ಸಿಗುತ್ತದೆ, ಧರ್ಮವನ್ನು ಒಬ್ಬರ ಮೇಲೆ ಹೇರುವುದರಿಂದ ಅಥವಾ ಅದರ ಹೆಸರಲ್ಲಿ ಬಡಿದಾಡುವುದರಿಂದ ಏನೂ ಸಾಧಿಸಲಾಗದು. @ ಧರ್ಮದವನು # ಧರ್ಮವನ್ನು ದುರ್ವ್ಯಾಖ್ಯಾನಿಸುವುದರಿಂದಲೋ, # ಧರ್ಮ/ಧರ್ಮಾನುಯಾಯಿಯನ್ನು ದ್ವೇಷಿಸುವುದರಿಂದಲೋ # ಧರ್ಮದ ಅವನತಿಯೊ,@ಧರ್ಮದ ಉನ್ನತಿಯೋ ಆಗಲಾರದು. ಇದೆಲ್ಲವನ್ನು ತಿಳಿದಿದ್ದರೂ ಹುಚ್ಚು ಜಾತಿ ರಾಜಕಾರಣಕ್ಕೆ, ಕ್ರೂರ ಜಾತಿ ಸಂಘಟನೆಗಳಿಗೆ ತಲೆ ಭಾಗುವ ಜನಗಳೆ ಒಮ್ಮೆ ಯೊಚಿಸಿ... ನಮಗೆ ಬೇಕಾಗಿರುವುದು ಭಾರತವೋ ಅಥವಾ ಹುಚ್ಚು ಜಾತೀಯತೆಯೋ!!! ಯಾವುದೇ ಧರ್ಮದ ನೈಜ ಅನುಯಾಯಿಗೆ ಎಂದಿಗೂ ಹಿಂಸೆಯಾಗಲೀ, ಜಾತೀಯತೆಯಾಗಲಿ, ರಾಷ್ಟ್ರದ್ರೊಹವಾಗಲೀ ಬೇಕಿಲ್ಲ ಅದೆಲ್ಲವೂ ಅವನಿಗೆ ಧರ್ಮ ದ್ರೊಹವೇ ಆಗಿರುತ್ತದೆ, ಅದು ಅವನಿಗೆ ಆತ್ಮ ವಂಚನೆಯ ಕಹಿಯನ್ನೆ ಕೊಡುತ್ತದೆ. ಇಂದಿನ ಭಾರತದಲ್ಲಿ ನಾಯಕರೆನಿಸಿಕೊಂಡವರು ತಮ್ಮ ಸ್ವಾರ್ಥಕ್ಕಾಗಿ ಧರ್ಮ ಧರ್ಮಗಳ ಮದ್ಯೆ ವಿಷಬೀಜ ಬಿತ್ತಿ ಎಲ್ಲರಿಗೂ ಅಧರ್ಮವನ್ನು ದಯಪಾಲಿಸಿ ಮೆರೆಯುತ್ತಿದ್ದಾರೆ. ಅವರು ಜನರಿಗೆ ತಿಳಿಯದೆ ಶಕುನಿಯಾಗಿ ಭಾರತಕ್ಕೆ ರಾಕ್ಷಸರಾಗಿದ್ದಾರೆ. ಇವರ ಈ ಹುಚ್ಚಾಟಕ್ಕೆ ಕಡಿವಾಣ ಬೀಳಬೆಕಾದರೆ ಪ್ರತಿಯೊಬ್ಬನು ತನ್ನ ಧರ್ಮವನ್ನು ತನ್ನ ಹೊರ ಮೈಯಿಂದ ಹೃದಯಾಂತರಾಳಕ್ಕೆ ಇಳಿಸಿಕೊಳ್ಳಬೇಕು.
ಎಲ್ಲರು ಮಾನವರಾಗಿ ಧರ್ಮ ಜಾತಿ ಮರೆತು ಮುನ್ನುಗ್ಗಬೇಕು. ಇದರೊಂದಿಗೆ ತಮ್ಮ ಧರ್ಮದ ಅವನತಿಯಾಗಬಹುದೆಂಬ ದಡ್ಡ ಭಯದಿಂದ ಹುಚ್ಚೆದ್ದಿರುವ ಧಾರ್ಮಿಕ ನಾಯಕರೆಂದುಕೊಂಡಿರುವ ಬಂಡ ನಾಯಕರು ನಿಜವಾದ ಧಾರ್ಮಿಕತೆ ಅರಿತು, ಧರ್ಮಕ್ಕೆ ಬೆನ್ನೆಲುಬಾಗಿ, ಜನರಿಗೆ ಒಳಿತಿನ ಆದರ್ಶವಾಗಿ ನಿಲ್ಲಬೇಕು.

ಮುದ್ದಿನ ಭಾರತದ ಹುಂಬ ಪ್ರಜೆಗಳೇಕೆ ಹೀಗಾದರು? ಇಷ್ಟೊಂದು ಮಂಕು ಬೂಧಿ ಯಾರು ಎರಚಿದರು? ಇದರಿಂದ ಹೊರ ಬರಲು ಸಾದ್ಯವಿಲ್ಲವೇ? ಯಾತಕ್ಕೆ ಬೇಕು ಈ ಜಾತೀಯತೆ? ಇದರಿಂದ ಸ್ವಾರ್ಥಿಗಳಾದ ಅಧರ್ಮೀಯರಿಗಲ್ಲದೆ ಸಜ್ಜನರಿಗೆ ಒಳಿತಿದೆಯೆ? ನೀವು ಸಜ್ಜನರಾಗ ಬೆಕಿಲ್ಲವೇ?! ಅಧರ್ಮದ ಹೊಲಸಿನಿಂದ ಮುಕ್ತರಾಗ ಬೇಕಲ್ಲವೇ? ನಿನ್ನ ಮನದಾಳದ ದೇವರು ನಿನ್ನ ಹೊಲಸು ಕಾರ್ಯಗಳ ಒಪ್ಪುವನೆ?

No comments:

Post a Comment