ನನಗಿಷ್ಟವಾದ ಒಂದು ಪೇಜ್

ಆಕಾಶದ ಅಂಚಿನಿಂದ ಕಂಡ ಮನುಷ್ಯರಿಲ್ಲದ ಈ ಲೋಕ..

ಓ ದೇವರೇ ಇದೆಂತಹ ಲೋಕ?
ಎಲ್ಲೆಲ್ಲೂ ರಾಕ್ಷಸರೇ! ಅವರಂತೂ ನಿಜವಾದ ರಾಕ್ಷಸರಾಗಿದ್ದರೆ ಎಷ್ಟೋ ಒಳ್ಳೆಯದಾಗುತಿತ್ತು!! ಆದರೆ ಇದು ಮನುಷ್ಯ ರಾಕ್ಷಸರ ಲೋಕ!!!
ಅಬ್ಬಾ ಏನಿದರ ಭಯಾನಕತೆ! ಧಿಗಂತಗಳೇ ಕಣ್ಣೀರಿನಲ್ಲಿ ಮುಳುಗುವಂತಾ ಕ್ರೌರ್ಯ, ಮನುಷ್ಯತ್ವ ಚಪ್ಪಲಿಯಂತೆ ತುಳಿಯಲ್ಪಟ್ಟ ಸಮಾಜ, ಭಾವನೆ ಬಾಂಧವ್ಯಗಳು ಲೆಕ್ಕಕಿಲ್ಲದ ಆಟ, ದಿನವೂ ಬೀಳುವ ರಕ್ತದಿಂದ ಬೆಂದುಹೋದ ಭೂಮಿ, ಕಂಡು ಸಹಿಸಲಾಗದೆ ದೂರಹೂಗುವ ತಯಾರಿಯಲ್ಲಿರುವ ಚಂದ್ರಮ, ಎಲ್ಲದರ ನಡುವೆ ಈ ರಾಕ್ಷಸೀಯ ಕುಲವನ್ನೇ ಸುಡುವತ್ತ ಹೆಜ್ಜೆ ಇಟ್ಟಿರುವ ಸೂರ್ಯ, ಒಟ್ಟಿನಲ್ಲಿ ಸೃಷ್ಟಿಕರ್ತನನ್ನೇ ಎದುರು ಹಾಕಿಕೊಂಡ ನೀಚ ಸಮೂಹ. ಆದರೂ ಇವರು ಸದ್ಯಕ್ಕೆ ಸುರಕ್ಷಿತರಾಗಿದ್ದಾರೆ, ಏಕೆಂದರೆ ಇವರ ಮದ್ಯೆ ಕೆಲವು ನೈಜ ಮನುಷ್ಯರಿದ್ದಾರೆ! ಈ ಅಲ್ಪಸಂಖ್ಯಾತ ಮನುಷ್ಯರಿಗಾಗಿಯೇ ತಾಳ್ಮೆಯಿಂದಿರುವ ಸೃಷ್ಟಿ ಕರ್ತನಿಗಿದೂ ನನ್ನ ನಮನ...
ಈ ಲೋಕದತ್ತ ಒಂದು ನೋಟ:
ಒಂದು ಕಡೆಯಲ್ಲಿ ಕೆಲಸ, ಹಣ ಮತ್ತು ಮೋಜಿನ ಜೀವನ ಇಷ್ಟೇ ತಿಳಿದಿರುವ ಬುದ್ದಿವಂತರೆಂದು ತಿಳಿದಿರುವ ಬುದ್ದಿಮಾಂದ್ಯರುಗಳ ಅಸಹ್ಯ ಸಮೂಹ, ಅಲ್ಲೇ ಅವರ ಸೊಕ್ಕಿನ ಕೊಂಬಾಗಿ ಬೆಳೆದ ಕ್ರೂರ ನಾಯಕತ್ವ. ಇವರ ಕ್ರೌರ್ಯಕ್ಕೆ ಸಿಕ್ಕು ಜರ್ಜರಿತವಾಗಿ ಇದ್ದೂ ಇಲ್ಲವಾದ ಸಮೂಹ ಇನ್ನೊಂದು ಕಡೆ.
ಇದರೊಂದಿಗೆ ಚಿನ್ನದಂತೆ ಪರಿಶುದ್ದರಾಗಲು ಧರ್ಮದ ದಾರಿ ಹಿಡಿದು ಹೊರಟು ದಾರಿ ತಪ್ಪಿ ಕಬ್ಬಿಣದಂತಾದ ಪಥಬ್ರಷ್ಟರು, ಇವರಂತೂ ದಾರಿ ತಪ್ಪೂದರೊಂದಿಗೆ ಬುದ್ದಿ ಕಳೆದುಕೊಂಡು, ಇತರರನ್ನು ಕೊಲ್ಲೂದಕ್ಕಗಿ ತಾವೇ ನಶಿಸುವ ಅರ್ಥಹೀನ ರಾಕ್ಷಸರು. ದರ್ಮದ ಮುಖವಾಡ ಹೊತ್ತ ಶೈತಾನನೆಂಬ ಅಯಸ್ಕಾಂತವೆ ಇವರ ಆದಾರ, ಈ ಅಯಸ್ಕಾಂತವು ಪಥಬ್ರಷ್ಟರನ್ನು ಸೆಳೆದುಕೊಂಡು ತನ್ನ ಸಾಮ್ರಾಜ್ಯ ವಿಸ್ತರಿಸುತ್ತಿದೆ. ಇದಕ್ಕೆ ಅನುಕೂಲವೆಂಬಂತೆ ದಾರ್ಮಿಕ ಜ್ಞಾನದ ಕೊರತೆಯೊಂದಿಗೆ ಇತರೆ ಸಾಮಾಜಿಕ ಕಾರಣಗಳಿಂದ ಪಥಬ್ರಷ್ಟರಾಗಿ ಇವರತ್ತ ವಾಲುತ್ತಿರುವ ಯುವ ಸಮೂಹ. ಈ ಕುಲವು ಇಡೀ ವಿಶ್ವದಲ್ಲಿ ಜ್ವಾಲಾಮುಖಿಯಾಗಿ ಹರಡಿ, ಎಲ್ಲಿ ಯಾವಾಗ ಬೇಕಾದರೂ ರಕ್ತ ಹರಿಯಬಹುದು ಎಂಬಷ್ಟು ಕಟೋರವಾಗಿದೆ.
ಇನ್ನೊಂದು ಮುಉಲೆಯಲ್ಲಿ ಯಾವುದನ್ನೂ ತಿಳಿಯದೆ ದಿನದಲ್ಲಿ ಒಂದು ತುತ್ತು ಅನ್ನಕ್ಕಾಗಿ ಹಪಹಪಿಸುವ ಸಣಕಲು ದೇಹಗಳು. ಇದನ್ನೆಲ್ಲಾ ಕಂಡರೂ/ಕೇಳಿದರೂ ಒಂದೂ ತಿಳಿಯದಂತೆ ತಮ್ಮ ಸಾಮ್ರಾಜ್ಯ ಸಮೃದ್ದ ಗೊಳಿಸುವತ್ತ ಕಣ್ಣು ನೆಟ್ಟಿರುವ ಧನ ದಾಹಿ ಹಣವಂಥರೆನಿಸಿಕೊಂಡ ಹೆಣಗಳು. ಇವರಿಗೆ ತಿಂದು ತೆಗಿದರೂ ಸಾಲದು, ತಮ್ಮ ಖಾತೆಗಳಲ್ಲಿ ತಮಗೆ ಬೇಕಾದಷ್ಟಲ್ಲದೆ, ತನ್ನ ಸಂತತಿಗಳಿಗೆ ಬೇಕಾಗುವಷ್ಟು ಕೂಡಿಡುವ ಹೆಮ್ಮಾರಿತನ.
ಎಲ್ಲದರ ಮದ್ಯೆ ಈ ಲೋಕಕ್ಕೆ ರಕ್ಷೆಯಾಗಿ ಜೀವಿಸುತ್ತಿರುವ ನೈಜ ಮಾನವರು. ಇವರಲ್ಲಿ ಮನುಷ್ಯತ್ವದ ಭಂಡಾರವಿದೆ, ಮಧುರ ಭಾವನೆಗಳ ಸುಮಧುರ ಸ್ಪಂದನೆಗಳಿವೆ, ಎಲ್ಲದಕ್ಕೂ ಮಿಗಿಲಾಗಿ(ಕಾರಣ: ಇದರಿಂದಲೇ ಎಲ್ಲಾ ಸದ್ಗುಣಗಳೂ ಇವರಿಗೆ ಸಿಕ್ಕಿವೆ) ಸೃಷ್ಟಿಕರ್ತನ ಮೇಲೆ ಅಪಾರ ನಂಬಿಕೆ ಇದೆ.
ಇದು ಆಕಾಶದ ಅಂಚಿನಿಂದ ಕಂಡ ಲೋಕ. ಇನ್ನು ನನ್ನ ತಾಣ(ಭಾರತ-ಕರ್ನಾಟಕ)ದತ್ತ ಮೆಲ್ಲೆ ಮುಂದುವರಿಯುತ್ತೇನೆ.
ಸಜ್ಜನರ ಆಶೀರ್ವಾದ ಬೇಡುತ್ತಾ...

No comments:

Post a Comment